ಹುಲ್ಲಿನ ಗರಿಮನೆ
ನಾ ಗೀಚಿದ ಗೆರೆಗಳ ಆಲಯ "ಹುಲ್ಲಿನ ಗರಿಮನೆ" ಗೆ ನಿಮಗೆ ಆತ್ಮೀಯ ಸ್ವಾಗತ.
ಭಾನುವಾರ, ಮಾರ್ಚ್ 30, 2014
ಬೇವು-ಬೆಲ್ಲ
ಬೇವು-ಬೆಲ್ಲ
ಯುಗಾದಿ ಹಬ್ಬದ
ಹಾರೈಕೆಯ ಸಿಹಿಯಲಿ
ಬಾಳಲಿ ಕಹಿಯು
ಕರಗುವುದೆಂದು ಕೊಂಡಿದ್ದೆ.
ಹಾಗಾಗಲಿಲ್ಲ,
ಹಾರೈಕೆಯ ಬೆಲ್ಲವನು
ಎಚ್ಚರಿಕೆಯ ಬೇವಿನಲಿ
ಸುತ್ತಿ ಕೊಟ್ಟಿದ್ದರು ಹಿತೈಷಿಗಳು
ಸಿಹಿರೋಗ ಬಾರದಿರಲೆಂದು.
- ಸಂತೋಷ ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ
ಶನಿವಾರ, ಮಾರ್ಚ್ 22, 2014
ಗಾಳಿಪಟ
ಗಾಳಿಪಟ
********
ಬಾಲ್ಯದ ನೆನಪುಗಳು
ಹಾರಿ ಬಿಟ್ಟ ಗಾಳಿಪಟದಂತೆ,
ದೂರದಿ ಅಂದವ
ಸವಿಯಬೇಕು ವಿನಃ,
ಮತ್ತೆ ಮುಟ್ಟಲಾಗದು.
-ಸಂತೋಷ ನಾಯಕ್. ಎಸ್
ಶನಿವಾರ, ಮಾರ್ಚ್ 15, 2014
ಹೊತ್ತಿಲ್ಲ
ಹೊತ್ತಿಲ್ಲ
*******
ಕವಿಯಾಗಲು
`ಹೊತ್ತಿಲ್ಲ' ಎನ್ನುತ್ತಿದ್ದವರ
ತಲೆ ಖಾಲಿಯಾಗಿತ್ತು!
-ಸಂತೋಷ ನಾಯಕ್. ಎಸ್
ಗುರುವಾರ, ಮಾರ್ಚ್ 13, 2014
ಸವೆತ
ಸವೆತ
*******
ಬಾಳ ಪಯಣದಲಿ
'ಸವೆತ'ವೂ, ಕವಿತೆಯ
ವಿಷಯವಾಗುವುದು
ಎನ್ನುವಷ್ಟರಲಿ,
ಕೊನೆಯ ಸಾಲು
ವಿರಾಮ ಇಟ್ಟಿತ್ತು.
-ಸಂತೋಷ ನಾಯಕ್. ಎಸ್
ಸವೆತ
ಸೋಮವಾರ, ಮಾರ್ಚ್ 10, 2014
ಚಿಂತೆ
ಚಿಂತೆ
*****
ಚಿಂತೆಯಿಂದ
ಚಿತೆಯಾದರೂ
ಅದರಲ್ಲೊಂದು
ನಶೆ ಇಹುದು,
ದೇಹಕ್ಕೆ ಹಾನಿಯಾದರೂ
ಮನಕೆ ಮದನೀಡುವ
ಮದ್ಯದಂತೆ!
-ಸಂತೋಷ ನಾಯಕ್. ಎಸ್
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)