ಶನಿವಾರ, ಆಗಸ್ಟ್ 10, 2013

ನಿಸ್ವಾರ್ಥಿ


********
ಆಶ್ರಮದಿ ಮುಪ್ಪ ಕಳೆವ
ಮಗನ ಶ್ರೇಯ ಬಯಸುತಿರುವ
ಹಾಲನ್ನಿತ್ತು ಪೊರೆದ ತಾಯಿ.

ಮಗನ ವಿದ್ಯೆ ವೃತ್ತಿಗೆಂದು
ಆಸ್ತಿ, ದುಡಿಮೆ ಒತ್ತೆ ಇಟ್ಟು
ಹಸಿದ ಹೊಟ್ಟೆ ನೀರ ಬಟ್ಟೆ
ದಿನವ ಕಂಡ ತೆಂದೆ ದೇವ.

ಜ್ಞಾನ-ವಿದ್ಯೆ ಪಂಥದಲ್ಲಿ
ಶಿಷ್ಯನೆದುರು ಸೊಲುಕ೦ಡು
ಸೋಲಿನಲ್ಲೂ ಗೆಲುವ ಕ೦ಡ
ಬ್ರಹ್ಮರೂಪಿ ಗುರುದೇವ

ಈ ಮೂರು ದೇವರೋಳು
 ಸ್ವಾರ್ಥದ್ವಿಷವು ಇರುತಿರೆ
ಕಾಣಲಿತ್ತೆ ಮಗನ ಯಶದ ಗರಿ?


  - ಸಂತೋಷ ನಾಯಕ್. ಎಸ್

1 ಕಾಮೆಂಟ್‌: