********
ಆಶ್ರಮದಿ ಮುಪ್ಪ ಕಳೆವ
ಮಗನ ಶ್ರೇಯ ಬಯಸುತಿರುವ
ಹಾಲನ್ನಿತ್ತು ಪೊರೆದ ತಾಯಿ.
ಮಗನ ವಿದ್ಯೆ ವೃತ್ತಿಗೆಂದು
ಆಸ್ತಿ, ದುಡಿಮೆ ಒತ್ತೆ ಇಟ್ಟು
ಹಸಿದ ಹೊಟ್ಟೆ ನೀರ ಬಟ್ಟೆ
ದಿನವ ಕಂಡ ತೆಂದೆ ದೇವ.
ಜ್ಞಾನ-ವಿದ್ಯೆ ಪಂಥದಲ್ಲಿ
ಶಿಷ್ಯನೆದುರು ಸೊಲುಕ೦ಡು
ಸೋಲಿನಲ್ಲೂ ಗೆಲುವ ಕ೦ಡ
ಬ್ರಹ್ಮರೂಪಿ ಗುರುದೇವ
ಈ ಮೂರು ದೇವರೋಳು
ಸ್ವಾರ್ಥದ್ವಿಷವು ಇರುತಿರೆ
ಕಾಣಲಿತ್ತೆ ಮಗನ ಯಶದ ಗರಿ?
- ಸಂತೋಷ ನಾಯಕ್. ಎಸ್
100ಕ್ಕೆ 100 ನಿಜ. ಅವರೇನಾದರೂ ಸ್ವಾರ್ಥಪರರಾಗಿದ್ದಾರೆ ಇರುತಿರಲಿಲ್ಲ ನಮಗೆ ಈ ಸ್ಥಾನ ಮಾನ!
ಪ್ರತ್ಯುತ್ತರಅಳಿಸಿ