**************
ಮೇವನ್ನೊ೦ದ ಎಸೆದರು
ಎಸೆದು ನನ್ನ ಹಿಡಿದರು
ಹಿಡಿದು ನನ್ನ ಕೊಂದರು.
ಸ್ಥಳದ ಹೆಸರು ಬಂದರು
ಅಲ್ಲಿಗೆ ನನ್ನ ಒಯ್ದರು
ನೋಡ ಜನ ಬಂದರು
ಏಲಂ ಏಲಂ ಎಂದರು
ಮನೆಗೆ ಹೊತ್ತು ತಂದರು
ನನ್ನ ಕಡಿದು ಕೊಯ್ದರು
ಗಡಿಗೆಯೊಳಗೆ ಇತ್ತರು
ಉಪ್ಪು ಖಾರ ಎಸೆದರು
ಒಲೆಯ ಶಾಖ ಕೊಟ್ಟರು
ಎಲ್ಲ ಸೇರಿ ತಿಂದರು .
- ಸ೦ತೋಷ
ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ