ಮಂಗಳವಾರ, ಮಾರ್ಚ್ 12, 2013

*ಮತ್ಸರ*


ರಮೆಯೆ ನಿನ್ನ
ರಮಿಸಲೆ೦ದು
ಪ್ರೇಮಗೀತೆ
ಬರೆಯ ಹೊರಟೆ ,
ಮತ್ಸರದಿ ಲೇಖನಿಯು
ಶಾಯಿ ಕಕ್ಕಿತು..

ಪ್ರಯತ್ನ ಬಿಡಲಿಲ್ಲ..

ಹಾಡಿ ನಿನ್ನ
ರಮಿಸಲೆ೦ದು
ಮತ್ತೆ ಮತ್ತೆ
ಮನದಿ ನೆನೆದು
ಕಂಠಪಾಠ ಮಾಡಿಕೊಂಡೆ,
ಹಾಡಲೆಂದು ಬಾಯಿ ತೆರೆದೆ
ಧೂಳು ಗಾಳಿ ಕಸವು ಬಂದು
ಮತ್ಸರದಿ ಕೆಮ್ಮು ತ೦ದಿತು ....

- ಸಂತೋಷ ನಾಯಕ್. ಎಸ್ 


(ಐದನೇ ತರಗತಿಯಲ್ಲಿ ಮೋದ ಮೊದಲು ಇಂಗ್ಲೀಷು ಕಾಪಿ ಬರೆಯಲು ಖರೀದಿಸಿದ “ಬಡವರ ಕಡಿಮೆ ಬೆಲೆಯ ಶಾಯಿ ಪೆನ್ನು ಕಾಪಿ ಪುಸ್ತಕದ ಪುಟವನ್ನು  ಕೆಡಿಸಿದ ದಿನಗಳು ನೆನಪಿಗೆ ಬಂದಾಗ ಬರೆದ ಸಾಲುಗಳು ಮೊದಲ ಚರಣ.. ಎರಡನೇ ಚರಣ ಹೀಗೆ ಸುಮ್ಮನೆ..) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ