ಸೋಮವಾರ, ಮಾರ್ಚ್ 11, 2013



ಮೆಟ್ಟಬೇಡಿರಣ್ಣ  ಎನ್ನ
ತುಳಿಯದಿರಿ, ಮೆಟ್ಟಿ
ತುಳಿದು ಮನದ ನೋವಿಗೆ
ಮಯ್ಯ ನೋವ ಸೇರಿಸದಿರಿ

ನನ್ನವರ ಕೈತಪ್ಪಿ
ಬಿದ್ದಿಹೇನು ನಾನು, ಕಣ್ಣಿರುವ
ಕುರುಡರ೦ತೆನ್ನ ಮೆಟ್ಟಬೇಡಿ
  
ನನ್ನ೦ತೆ ಬಿದ್ದಿದ್ದ
ನನ್ನಣ್ಣ ಒ೦ದು ದಿನ,
ಜ೦ಗುಲಿಯ ಜಾತ್ರೆಯಲಿ
ಆತನೆತ್ತಿ ಕೊ೦ಡವರು
ಗೊತ್ತಿಲ್ಲ ಯಾರೆ೦ದು!!!

ಮೈ ಮನದ ನೋವಿನಲಿ
ಮರೆತ್ತಿದ್ದೆ ಪರಿಚಯಿಸಲು...
ನಾನು ಒ೦ದು ರುಪಾಯಿ..
ನನ್ನಣ್ಣ ನೂರು ರುಪಾಯಿ!!
   
- ಸಂತೋಷ ನಾಯಕ್. ಎಸ್ 

2 ಕಾಮೆಂಟ್‌ಗಳು:

  1. ನೂರು ರೂಪಾಯಿಗೂ ಮೂಲ ಆ ಒಂದು ರೂಪಾಯಿಯೇ ಅಲ್ಲವೇ ಗೆಳೆಯ.
    http://www.badari-poems.blogspot.in/

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರತಿಕ್ರಿಯೆಗೆ ಧನ್ಯವಾದಗಳು. ಸ್ಥೂಲ ಸಿಕ್ಕಾಗ ಮೂಲವನ್ನು ಮರೆಯುವ ಜನರನ್ನು ಏನೆನ್ನೋಣ?..!!

      ಅಳಿಸಿ